[KANNADA]ನನ್ನ ಪರಿಚಯ

ಹರೇ ಕೃಷ್ಣ , ನನ್ನ ಪರಿಚಯ: ನಾನು ಕಂಪ್ಲಿ ಶೇಷಗಿರಿಆಚಾರ್ ಜೋಯಿಸ್ , ನನಗೆ ಈಗ 37 ವರ್ಷ . ನಾನು, ನನ್ನ ತಂದೆ-ತಾಯಿ , ಪತ್ನಿ, ಮಗ (7 ವರ್ಷ ), ಮಗಳು (3 ವರ್ಷ ) ಬೆಂಗಳೂರ್ ಅಲ್ಲಿ ವಾಸವಾಗಿದ್ದೇವೆ. ಲೌಕಿಕ ವೃತ್ತಿಯನ್ನು ತೊರೆದು , ವೈದಿಕ ಜೀವನವನ್ನು ನಡೆಸುತ್ತಿದ್ದೇನೆ . ಮಧುಕರ ವೃತ್ತಿಯನ್ನು ಆರಿಸಿ ಉಪಜೀವನವನ್ನು ಸಾಗಿಸುತ್ತಿದ್ದೇನೆ. ಗುರುಗಳ ಅನುಗ್ರಹ ಈ ಸೌಭಾಗ್ಯ ದೊರೆಯಿತು . ಅಪರೂಪದ ಮನುಷ್ಯ ಜನ್ಮ. ಅದರಲ್ಲಿಯೂ ಜ್ಞಾನಕ್ಕೆ ಅರ್ಹತೆ ಹೊಂದಿರುವ ಜನ್ಮ. ಅದರಲ್ಲಿಯೂ ಮಧ್ವಾಚಾರ್ಯರ, ಟೀಕಾರಾಯರ, ವಾದಿರಾಜರ, ಶ್ರೀಪಾದರಜರ , ವ್ಯಾಸರಾಜರ, ರಘೋತ್ತಮರ, ರಾಘವೇಂದ್ರ ಸ್ವಾಮಿಗಳ, ಅನುಗ್ರಹ ಪಡೆಯಲು ಅರ್ಹತೆ ಹೊಂದಿರುವ ಜನ್ಮ. ಹೀಗೆ ಈ ಜನ್ಮದ ಸಾರ್ಥಕತೆ ಏನು ? ನಾನು ಏನು ಮಾಡಬೇಕು? ಯಾವುದು ನನ್ನ ಧರ್ಮ? ಈ ಜನ್ಮದಲ್ಲಿ ಏನು ಮಾಡಿದರೆ Value Addition ಆಗುತ್ತದೆ ? ಹೀಗೆ ಸೂಕ್ಷ್ಮವಾಗಿ ಯೋಚಿಸುವ ಹಂಬಲ ದಿನೇ ದಿನೇ ಹೆಚ್ಚಾಗುತ್ತಿತ್ತು ಇದು ಇಂದಿನ ಯೋಚನೆ ಅಲ್ಲ ,ಸುಮಾರು ನಾನು 7ನೇ ತರಗತಿ ಓದುತಿದ್ದಾಗ ನನಗೆ ನಿರಂತರ ಪ್ರಶ್ನೆಗಳು ಕಾಡುತ್ತಿದ್ದವು . ಯಾರು ನಾನು ? ದೇವರು ಏಕೆ ಬೇಕು ? ಎಲ್ಲ ಮತಗಳಲ್ಲಿಯೂ ರಾಘವೇಂದ್ರ ಸ್ವಾಮಿಗಳಂತೆ ಪವಾಡ ಪುರುಷರಿದ್ದಾರೆ, ಹಾಗಾದರೆ ನಮ್ಮ ಮತವೇ ಸರಿ ಎಂದು ಹೇಳುವುದು ಎಷ್ಟು ಉಚಿತ ? ಯಾಕೆ ನಾನು ಜುಟ್ಟು(ಶಿಖೆ...