[KANNADA]ನನ್ನ ಪರಿಚಯ

 ಹರೇ ಕೃಷ್ಣ ,

ನನ್ನ ಪರಿಚಯ:




ನಾನು ಕಂಪ್ಲಿ ಶೇಷಗಿರಿಆಚಾರ್ ಜೋಯಿಸ್  , ನನಗೆ ಈಗ 37 ವರ್ಷ . ನಾನು, ನನ್ನ ತಂದೆ-ತಾಯಿ , ಪತ್ನಿ, ಮಗ (7 ವರ್ಷ), ಮಗಳು (3 ವರ್ಷ ) ಬೆಂಗಳೂರ್ ಅಲ್ಲಿ ವಾಸವಾಗಿದ್ದೇವೆ. ಲೌಕಿಕ ವೃತ್ತಿಯನ್ನು  ತೊರೆದು , ವೈದಿಕ ಜೀವನವನ್ನು ನಡೆಸುತ್ತಿದ್ದೇನೆ . ಮಧುಕರ ವೃತ್ತಿಯನ್ನು ಆರಿಸಿ ಉಪಜೀವನವನ್ನು ಸಾಗಿಸುತ್ತಿದ್ದೇನೆ. ಗುರುಗಳ ಅನುಗ್ರಹ ಈ ಸೌಭಾಗ್ಯ ದೊರೆಯಿತು .

ಅಪರೂಪದ ಮನುಷ್ಯ ಜನ್ಮ. ಅದರಲ್ಲಿಯೂ ಜ್ಞಾನಕ್ಕೆ ಅರ್ಹತೆ ಹೊಂದಿರುವ ಜನ್ಮ. ಅದರಲ್ಲಿಯೂ ಮಧ್ವಾಚಾರ್ಯರ, ಟೀಕಾರಾಯರ, ವಾದಿರಾಜರ, ಶ್ರೀಪಾದರಜರ , ವ್ಯಾಸರಾಜರ, ರಘೋತ್ತಮರ, ರಾಘವೇಂದ್ರ ಸ್ವಾಮಿಗಳ, ಅನುಗ್ರಹ ಪಡೆಯಲು ಅರ್ಹತೆ ಹೊಂದಿರುವ ಜನ್ಮ. ಹೀಗೆ ಈ ಜನ್ಮದ ಸಾರ್ಥಕತೆ ಏನು ?
ನಾನು ಏನು ಮಾಡಬೇಕು? 
ಯಾವುದು ನನ್ನ ಧರ್ಮ? 
ಈ ಜನ್ಮದಲ್ಲಿ ಏನು ಮಾಡಿದರೆ Value Addition  ಆಗುತ್ತದೆ ?

ಹೀಗೆ ಸೂಕ್ಷ್ಮವಾಗಿ ಯೋಚಿಸುವ ಹಂಬಲ ದಿನೇ ದಿನೇ ಹೆಚ್ಚಾಗುತ್ತಿತ್ತು

ಇದು ಇಂದಿನ ಯೋಚನೆ ಅಲ್ಲ  ,ಸುಮಾರು ನಾನು 7ನೇ ತರಗತಿ ಓದುತಿದ್ದಾಗ ನನಗೆ ನಿರಂತರ ಪ್ರಶ್ನೆಗಳು ಕಾಡುತ್ತಿದ್ದವು. ಯಾರು ನಾನು ? ದೇವರು ಏಕೆ ಬೇಕು ? ಎಲ್ಲ ಮತಗಳಲ್ಲಿಯೂ  ರಾಘವೇಂದ್ರ ಸ್ವಾಮಿಗಳಂತೆ ಪವಾಡ ಪುರುಷರಿದ್ದಾರೆ, ಹಾಗಾದರೆ  ನಮ್ಮ ಮತವೇ ಸರಿ ಎಂದು ಹೇಳುವುದು ಎಷ್ಟು ಉಚಿತ ? ಯಾಕೆ  ನಾನು ಜುಟ್ಟು(ಶಿಖೆ) ಬಿಡಬೇಕು? ಯಾಕೆ ಆಚೆ ತಿನ್ನಬಾರದು? ಸಿನಿಮಾ ಏಕೆ  ನೋಡಬಾರದು? ಮಂತ್ರಗಳನ್ನ ಏಕೆ ಹೇಳಬೇಕು ..... ಹೀಗೆ  ನೂರಾರು ಪ್ರಶ್ನೆಗಳು ಪೀಡಿಸುತ್ತಿದ್ದವು ..

ಚಿಕ್ಕ ಊರು , ಎಲ್ಲಿಯೂ ಸರಿಯಾದ ಉತ್ತರಗಳು ಸಿಗುತ್ತಿರಲಿಲ್ಲ. ಕೆಲವೊಮ್ಮೆ ಸಂಶಯಗಳು ಪ್ರಶ್ನೆರೂಪ ತಾಳಲು ಅಸಮರ್ಥ ವಾಗಿಬಿಡುತಿದ್ದವು. ಅಪ್ರಬುದ್ದ ಮನಸ್ಸು ಯಾವುದನ್ನೂ ಸರಿಯಾಗಿ ನಿರ್ಧರಿಸಲಾಗದೆ  ಮುಂದೆ ಮುಂದೆ ತಳ್ಳುತ್ತಿತ್ತು.

ಹೀಗೆ ಕಾಲದ ಪ್ರವಾಹದಲ್ಲಿ ಲೌಕಿಕ ವಿದ್ಯಾಭ್ಯಾಸ ನಡೆಯುತ್ತಾ ಬಂತು. ಹೀಗೆ ಒಮ್ಮೆ   ಕಂಪ್ಲಿಯಲ್ಲಿರುವ ಇಷ್ಟದೇವರ  ಪೂಜೆಮಾಡುವ ಅವಕಾಶ ದೊರೆಯಿತು. ಸುಮಾರು 1 ವಾರ ಪೂಜೆ ಮಾಡಿದೆ . ನಂತರ ನಾನು ಪಡೆದ ಬದಲಾವಣೆಗಳೇ ಬೇರೆ. ದಯಾಸಿಂಧುವಾದ  ಅವನ ಸ್ಪರ್ಶದಿಂದ , ನನ್ನ ಶಾಸ್ತ್ರಾಧ್ಯಯನಕ್ಕೆ ಇದ್ದ ಅನಂತ ಪಾಪಗಳು ನಾಶವಾದವು. ಗುರುಗಳ ಸಂಪರ್ಕವಾಯಿತು. ಚೆನ್ನಾಗಿ ಅಧ್ಯಯನ ಮುಂದುವರೆಯಿತು. .

 ನನ್ನ 10ನೇ ತರಗತಿ ವರೆಗೆ ಬಳ್ಳಾರಿ ಹತ್ತಿರದ ಕಂಪ್ಲಿ ಎಂಬ ಊರಿನಲ್ಲಿ  ಶಿಕ್ಷಣವನ್ನು ಮುಗಿಸಿದೆ. ಕಂಪ್ಲಿ ಇದೊಂದು ಅದ್ಭುತವಾದಂತಹ ಕ್ಷೇತ್ರ. ನನ್ನ  ಬಾಲ್ಯವೆಲ್ಲವೂ ಕೂಡ ಈ ಊರಿನಲ್ಲಿ ಕಳೆಯಿತು. ತುಂಗಭದ್ರಾನದಿಯ ತೀರ, ಪುಟ್ಟದಾದ ಶ್ರೀನಿವಾಸನ ದೇವಸ್ಥಾನ, ಮನೆ ತುಂಬಾ 15-20 ಗೋವುಗಳು, ಎಲ್ಲರೂ ಸೇರಿ ಇರುವಂತಹ ತುಂಬು ಕುಟುಂಬ, ಎಲ್ಲಾ ಹಬ್ಬಗಳಿಗೆ ತುಂಬಿ ತುಳುಕುತ್ತಿದ್ದ ಬಂಧು-ಬಳಗದವರು, ತುಳಸಿಯ ಸೇವೆ, ಬ್ರಾಹ್ಮಣರ ಸೇವೆ -ಹೀಗೆ ಒಂದು ಕರ್ಮಯೋಗಕ್ಕೆ ಹೇಳಿ ಮಾಡಿಸಿದಂತಹ ಅದ್ಭುತವಾದಂತಹ ತಾಣ.

 ಒಂದು ಕಡೆ ನೋಡಿದರೆ 10 ಕಿ. ಮೀ ದೂರದಲ್ಲಿ ಮಹಾ ಮಹಾ  ಜ್ಞಾನಿಗಳ ತಪೋಭೂಮಿಯಾದ ನವಬೃಂದಾವನ ಗಡ್ಡೆ ,ಇನ್ನೊಂದು ದಿಕ್ಕಿನಲ್ಲಿ 10 ಕಿ.ಮೀ ದೂರದಲ್ಲಿ ಪವಿತ್ರವಾದಂತಹ ವ್ಯಾಸರಾಜರ ಪ್ರಾಣದೇವರ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರದೇವರ ಕಾರ್ಯಕ್ಷೇತ್ರವಾದ ,ರುದ್ರದೇವರ ತಪೋಭೂಮಿಯಾದ ಹಂಪೆ, ಈ ಕ್ಷೇತ್ರಗಳ ನಿರಂತರ ಒಡನಾಟ ಚಿಕ್ಕಂದಿನಿಂದಲೇ ಬಹಳ ಪ್ರಭಾವ ಬೀರಿತ್ತು.

ನಂತರ PUC (Science) ಓದಿಗಾಗಿ ಬೆಂಗಳೂರ್ ನಗರಕ್ಕೆ ಬಂದೆ. II PUC ಯಲ್ಲಿ  PCM ಶೇ 94% ಅಂಕ ಪಡೆದು ನಂತರ ಇಂಜಿನೀರಿಂಗ್(B.E in Electronics and Communication) ಶಿಕ್ಷಣಕ್ಕೆ ಪ್ರವೇಶ ಪಡೆದೆ. ನಂತರ ಅಧ್ಯಯನಕ್ಕೆ ಅನುಕೂಲವಾಗಲೆಂದು Lecturer ಹುದ್ದೆ ಪಡೆಯಲು M.Tech ಮಾಡಲು ನಿರ್ಧರಿಸಿದೆ. ಹಾಗೆಯೇ M.Tech in VLSI & Embedded System Design ವಿಷಯದಲ್ಲಿ 2012 Distinction ಅಲ್ಲಿ ಮುಗಿಸಿದೆ. 2012-2019ರ ವರೆಗೆ ಮೈಸೂರಿನ  Maharaja Institute of Technology Mysore ಎಂಬ ಪ್ರತಿಷ್ಠಿತ  Engineering Collegeನಲ್ಲಿ Professor ಆಗಿ ಕೆಲಸ ಮಾಡಿದೆ.

ಲೌಕಿಕ ಮತ್ತು ವೈದಿಕ ಎರಡನ್ನೂ ಸಮವಾಗಿ ತೂಗಿಸುತಿದ್ದೆ.  ಮೈಸೂರ್ ಅಲ್ಲಿ ಕೆಲಸ ಸಿಕ್ಕಿತು. ನನ್ನ ಪೂರ್ವಜನ್ಮದ ಸುಕರ್ಮ ಫಲ ಗಳನ್ನು ಎಂದಿಗೂ ಪರಮಾತ್ಮ ನನಗೆ ಕಾಲ ಕಾಲಕ್ಕೆ ಒದಗಿಸುತ್ತಲೇ ಬಂದಿದ್ದಾನೆ. ಈ ಬಾರಿ ಮೈಸೂರ್ ನಲ್ಲಿ ಮತ್ತೊಂದು ಮಾಹಾಕಾರುಣ್ಯವನ್ನು ಮಾಡಿದ. ಮೈಸೂರ್ ನಲ್ಲಿ  ಎಲ್ಲಿ ವಾಸಮಾಡಬೇಕು ? , ಊಟಕ್ಕೆ  ಏನು ಮಾಡಲಿ ? ಅಂತ  ಚಿಂತಾಕ್ರಾಂತನಾಗಿದ್ದೆ  . ಕರ್ಮವಶಾತ್   ವಶಿಷ್ಠರ ಆಶ್ರಮದಂತೆ  ತಪೋ ಮೌನದಿಂದ ಸಾತ್ವಿಕತೆಯನ್ನು  ದಶದಿಕ್ಕುಗಳಲ್ಲಿ  ಹಂಚುವಂತಿದ್ದ  ಶ್ರೀಸತ್ಯಸಂಕಲ್ಪರತೀರ್ಥರ ಮಹಾಸನ್ನಿಧಾನಕ್ಕೆ ಭಗವಂತ ನನ್ನನ್ನು  enroll ಮಾಡಿಸಿದ. ಇಂದಿಗೂ (2024) ನಿತ್ಯ ಗಂಗಾ ಸನ್ನಿಧಾನ ಸ್ವಾಮಿಗಳ ವೃಂದಾವನದ ಸುತ್ತಲೂ ಇದೆ. ಅಲ್ಲಿ ಇದ್ದ 1 ವರ್ಷ ಅದು ಸ್ವರ್ಗ , ಅದು ವೈಕುಂಠ , ಅದು ಮೋಕ್ಷ ....... ಏನೆಲ್ಲಾ ಹೇಳಿದರು ಸಾಲದು ..

ಹೀಗೆ  ಮಠ-college-ಮಠ  ಅಂತ ಪ್ರಯಾಣ ನಡೆಯುತ್ತಲೇ ಇತ್ತು . ಒಬ್ಬ ಅವಧೂತರ   ಸಂಪರ್ಕ ನನ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು  ಮಾಡಿತು. ನಾನು ಬಹಳ ಪ್ರೀತಿಯಿಂದ ನೋಡುತಿದ್ದ ಭಗವತ್ ಗೀತೆಗೆ ಒಂದು ಉದಾಹರಣೆಯಾಗಿ ಇದ್ದರು.ತಮ್ಮ ಹೆಸರು , ಊರು ಯಾವುದನ್ನೂ ಪ್ರಚಾರಕ್ಕೆ ಅವರು  ಬಳೆಸುತ್ತಿರಲಿಲ್ಲ. ಹಾಗಾಗಿ  ಅವರ ಬಗ್ಗೆ ನಾನು ವಿಸ್ತಾರವನ್ನು ಬರೆಯುತಿಲ್ಲ.

ದಿನವೂ ಸಂಜೆ ವೃಂದಾವನದ ಮುಂದೆ ಕುಳಿತು ಶ್ರೀ ಮಧ್ವಾಚಾರ್ಯರ ಗೀತಾಭಾಷ್ಯ ಅದಕ್ಕೆ ಟೀಕಾರಾಯರ ಪ್ರಮೇಯದೀಪಿಕಾ  ಅದಕ್ಕೆ ಶ್ರೀ ಸುಮತೀಂದ್ರತೀರ್ಥರ - ಶ್ರೀ ಶ್ರೀನಿವಾಸತೀರ್ಥರ etc ದ ಅನುವಾದ ಮಾಡುತ್ತಾ ಕೂಡುತ್ತಿದ್ದೆ . ಮಠಕ್ಕೆ ಬಂದವರಿಗೆ ಸ್ವಾಮಿಗಳ ಮಹತ್ವವನ್ನು ಹೇಳುತಿದ್ದೆ.

college ನಲ್ಲಿ ಒಳ್ಳೆಯ ಹೆಸರು ಇತ್ತು . Embedded Projects ಗೆ ಅಂತ ಇದ್ದ Self Design Lab ಎಂಬ ನಾನು ನಡೆಸುತಿದ್ದ ಪ್ರಯೋಗಾಲಯ ಭಗವತ್ಗೀತಾ lab ಆಗಿ ಮಾರ್ಪಾಡಾಗಿತ್ತು. ಹೆಜ್ಜೆ ಹೆಜ್ಜೆಗೂ ಮನಸ್ಸಿನಲ್ಲಿ ಗೊಂದಲ " ಇದು ನನ್ನ Passion ಅಲ್ಲ. ಇದು ನನ್ನ ವೃತ್ತಿ ಅಲ್ಲ. ಇದು ನನ್ನ Interest ಅಲ್ಲ. ಇದು ನನ್ನ ಸಾಧನಾ ಮಾರ್ಗವಲ್ಲ. Embedded lab ಮಾಡಲು ಸಾವಿರಾರು ಜನರಿದ್ದಾರೆ ಆದರೆ ಲೌಕಿಕ  ಶಿಕ್ಷಣ ಮತ್ತು ವೈದಿಕ ಶಿಕ್ಷಣ ಪಡೆದು ಸಮಾಜವನ್ನು ಸರಿಮಾರ್ಗದಲ್ಲಿ ಪ್ರಚೋದಿಸುವವರು ವಿರಳ. ಹಾಗಾಗಿ ಪಾಠ-ಪ್ರವಚನ ಮಾಡುತ್ತಾ ಜೀವನ ಮಾಡಬೇಕು ಮತ್ತು ಗುರುಗಳಿಂದ, ನುರಿತ ಜ್ಞಾನಿಗಳಿಂದ ಮತ್ತಷ್ಟು ಜ್ಞಾನ ಸಂಪಾದನೆ ಮಾಡುತ್ತಾ ಕಾಲ ಕಳೆಯಬೇಕು " ಎಂಬ ಕೊರಗು ದಿನೇ ದಿನೇ ಹೆಚ್ಚುತ್ತಾ ಹೋಯಿತು ..

ಒಂದು ಎರೆಡು ಮೂರು ..ಹೀಗೆ 7 ವರ್ಷಗಳು ಕಳೆದವು. ಮನಸ್ಸಿನ ತೊಳಲಾಟ ಅತಿಯಾಗಿ ಹೋಗಿತ್ತು. ಗುರುಗಳು ಒಂದು ಮಾತು ಹೇಳಿದ್ದರು    "ಎರೆಡು ದೋಣಿಯಲ್ಲಿ ಕಾಲು ಇಡಬೇಡ" ಅಂತ. ಆ ಮಾತು ಪದೇ ಪದೇ ಪ್ರತಿಧ್ವನಿಸುತಿತ್ತು.  ಸರ್ವಗುರುಗಳ ಅನುಗ್ರಹ - ಪರಮಾತ್ಮನ ದಯೆ  ಒಂದು ದಿನ ಬೆಳೆಗ್ಗೆ college ನ ನನ್ನ ಕೊಠಡಿಯಲ್ಲಿ Resignation letter ಬರೆದೆ HOD ಅವರ ಮೂಲಕ Principal ಗೆ ತಲುಪಿಸಿ ನನ್ನ ಲೌಕಿಕದ ಸಂಚಾರ ಮುಗಿಸಿದೆ.

ಚಿಕ್ಕ ಮಕ್ಕಳು, ಮನೆ ಜವಾಬ್ದಾರಿ ,ಮುಂದೆ ಏನು ? ಜೀವನ ಹೇಗೆ? ಎಲ್ಲಿಗೆ ಪ್ರಯಾಣ ? ಎಂಬ ಎಲ್ಲ ಪ್ರಶ್ನೆಗೆ  ನಮ್ಮ ಗುರುಗಳು "ನಾಲ್ಕು ಜನರ ಮನೆಗಳಲ್ಲಿ ಬೇಡು ಯಾರು ಇಲ್ಲ ಅನ್ನೋದಿಲ್ಲ ಕಣೋ" ಎಂಬ  ಮಾತು ಮನಸ್ಸಿನಲ್ಲಿ ಭದ್ರವಾಗಿತ್ತು. ಅದರಂತೆಯೇ ನನ್ನ , ನನ್ನ ಮಗನ ವಿದ್ಯೆಗೆ ಮತ್ತು ಜೀವನಕ್ಕೆಂದು ಬೆಂಗಳೊರ್ ನಗರಕ್ಕೆ ಬಂದೆ. ಮಧುಕರಿ(ಯಾಯವಾರ) ಪ್ರಾರಂಭಿಸಿದೆ , ಇದೊಂದು  ಅಮೋಘವಾದ ವೃತ್ತಿ , ಇದು "ಭಗವತ್ಗೀತೆಯ ಪ್ರಯೋಗಾಲಯ" ಅಧ್ಯಯನ ಮಾಡಿದ್ದನ್ನ practicle ಆಗಿ ಅನುಭವಿಸಲಿಕ್ಕೆ ಇರುವ lab. ಹೃದಯದ ಗಟ್ಟಿತನ ಪರೀಕ್ಷೆ ಮಾಡುವ ಮತ್ತು ಗಟ್ಟಿತನ ಕೊಡುವ ಪವಿತ್ರ ಬ್ರಾಹ್ಮಣನ ವೃತ್ತಿ.  ಗುರುಗಳ ಅನುಗ್ರಹದಿಂದ ನಡೆಯುತ್ತಿದೆ.

 ಗುರುಗಳ ಅನುಗ್ರಹ ಮತ್ತು ಅವರ ಕರುಣೆಯಿಂದ ನಾನು ಮತ್ತು ನನ್ನ ಕುಟುಂಬದ ಎಲ್ಲರೂ ಕೂಡ ಈ ಒಂದು ಮಧುಕರಿ ವೃತ್ತಿಯಲ್ಲಿ ನಂಬಿಕೆಯಿಂದ ಇದ್ದೇವೆ. ನನ್ನ ಸಹಧರ್ಮಿಣಿಯು  ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಪ್ರೋತ್ಸಾಹವನ್ನು ಕೊಡುತ್ತಾ, ನಿತ್ಯದಲ್ಲಿ ನಡೆಯುವ ಭಗವಂತನ ವಿಷಯಕ ಪಾಠಗಳ ಚರ್ಚೆಗಳನ್ನು ಮನೆಮಂದಿಯ ಜೊತೆ ಹಂಚಿಕೊಳ್ಳುತ್ತಾ ತತ್ವಗಳನ್ನು ಅಳವಡಿಸಿಕೊಂಡು  ಪ್ರೋತ್ಸಾಹವನ್ನು ಕೊಡುತ್ತಿದ್ದಾಳೆ.

ಈಗ ಬೆಂಗಳೊರ್ ನಗರದ ಶ್ರೀನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತಿದ್ದೇವೆ .  ಮಕ್ಕಳಿಗೆ ಸಂಸ್ಕೃತ -ವ್ಯಾಕರಣ -ವೇದಾಂತ  ಪಾಠಗಳನ್ನು ಹೇಳುತಿದ್ದೇನೆ. ಉಪಜೀವನಕ್ಕಾಗಿ ಮಧುಕರ ವೃತ್ತಿಯನ್ನು ಆರಿಸಿದ್ದೇನೆ . 2 ತಿಂಗಳಿಗೊಮ್ಮೆ  ಆಸ್ತಿಕರ ಮನೆಗಳಿಗೆ ಹೋಗಿ 1/2-1 ಘಂಟೆ ಪ್ರವಚನ ಮಾಡಿ ಬಂದ ದಕ್ಷಣೆಯಿಂದ ಜೀವನವನ್ನು ಸಾಗಿಸುತಿದ್ದೇನೆ. ಇಂತಿಷ್ಟೆ ದಕ್ಷಿಣೆ ಕೊಡಬೇಕೆಂಬ ನಿಯಮ ಸರ್ವಥಾ ಇಲ್ಲ. 

ಪಾಠ -ಪ್ರವಚನ :

ಶ್ರೀಮದಾನಂದತೀರ್ಥರ ವಿಷ್ಣುತತ್ತ್ವನಿರ್ಣಯ  ಮತ್ತು ಗೀತಾ ಭಾಷ್ಯ ಗ್ರಂಥಗಳು ನನ್ನ ಮೇಲೆ ಗಾಢ ಪ್ರಭಾವವನ್ನು  ಬೀರಿದವು. ನ್ಯಾಯಸುಧಾ ಗ್ರಂಥವಂತು UNPARALLED ಗ್ರಂಥ. ಉತ್ಸಾಹಿ ಯುವಕರು ಈ ನ್ಯಾಯಸುಧಾ ಗ್ರಂಥವನ್ನು  ಓದದಿದ್ದರೆ  ಅವರು ಒಂದು ಅಪರೂಪದ ನಿಧಿಯನ್ನು ಕಳೆದುಕೊಂಡಂತೆಯೇ. ಹೀಗೆ ನನ್ನ ಆನಂದಕ್ಕಾಗಿ ನಾನು ಓದಿದೆ .

ಅಧ್ಯಯನಗಳು ಪ್ರಮೇಯ ಮತ್ತು ಪ್ರಮಾಣ ಗ್ರಂಥಗಳ ಸಮತೋಕದಲ್ಲಿ ನಡೆದರೆ ಆಧ್ಯಾತ್ಮದ ಪಥದಲ್ಲಿ ಗಟ್ಟಿತನ ಇರುತ್ತದೆ ಎಂಬುದು ನನ್ನ ವಿಶ್ವಾಸ .ಹಾಗೆಯೇ ಆಚಾರ್ಯರು ತಮ್ಮ ಗ್ರಂಥಗಳಲ್ಲಿ ಪ್ರಮಾಣ ಗ್ರಂಥಗಳು ಮತ್ತು  ಪ್ರಮೇಯ ಗ್ರಂಥಗಳು ಎರಡನ್ನು ಕೂಡ ನಮ್ಮ  ಮೇಲಿನ ಅನುಗ್ರಹಕ್ಕಾಗಿ ನೀಡಿದ್ದಾರೆ.

ಪ್ರಮಾಣ ಗ್ರಂಥಗಳು ಮೂಲಭೂತವಾದಂತಹ ವಿಷ್ಣುವಿನ ಸ್ವರೂಪ ಜ್ಞಾನ, ವಿಷ್ಣುವಿನ ಅಸ್ತಿತ್ವ ಈ ಹಿನ್ನೆಲೆಯಲ್ಲಿ ನಂಬಿಕೆಯನ್ನು ಹುಟ್ಟಿಸುವುದಕ್ಕೆ ಮತ್ತು ನಮ್ಮ ನಂಬಿಕೆಗಳನ್ನು ಪೋಷಿಸುವುದಕ್ಕೆ ಅವಶ್ಯವಾಗಿ ಬೇಕಾಗುತ್ತದೆ.

ಕೇವಲ ನಂಬಿಕೆಯ ತಳಹದಿ ಗಟ್ಟಿ ಇದ್ದರೆ ಸಾಲದು ಹಾಗಾಗಿ ನಮಗೆ ಆ ನಂಬಿಕೆಯ ಭದ್ರಬುನಾದಿಯಲ್ಲಿ ಬೆಳೆಬೇಕಾದ ವೃಕ್ಷದ ಅವಶ್ಯಕತೆಯೂ, ಅದರ ಎಲೆಗಳ ,ಹೂವುಗಳ ಅವಶ್ಯಕತೆಯೂ ಇದ್ದೇ ಇದೆ. ಇದರ ಫಲವಾಗಿ ಪ್ರಮೇಯ ಗ್ರಂಥಗಳ ಅಧ್ಯಯನವೂ ಕೂಡ ಪ್ರಬಲವಾಗುತ್ತದೆ. ಹಾಗಾಗಿ ಈ ಎರಡು ಪ್ರಮಾಣ ಪ್ರಮೇಯ ಪ್ರಪಂಚಗಳ ಸಮಾಗಮ ರೂಪದಲ್ಲಿ ಪಾಠಗಳನ್ನು ರೂಪಿಸಿದ್ದೇನೆ . ಕೆಲವು ಪಾಠಗಳು Online ಮೂಲಕ ನಡೆಯುತ್ತವೆ, ಕೆಲವು ಪಾಠಗಳು ಮನೆಯಲ್ಲಿ ಪೂರ್ಣ ಪ್ರಮಾಣದ ವಿದ್ಯಾರ್ಥಿಗಳಿಗಾಗಿ ಮತ್ತು ಶಾಲೆಗೆ ಹೋಗುವ ವಿದ್ಯಾರ್ಥಿಗಳಿಗಾಗಿ ರೂಪಿಸಿದ್ದೇನೆ.
ಪಾಠವನ್ನು ಹೇಳುವ ಕ್ರಮವನ್ನು ನಮ್ಮ ಗುರುಗಳ ಕರುಣೆಯಿಂದ ಪ್ರತಿಯೊಂದು ದಿನದ ವಿಚಾರಗಳನ್ನು ಸೂಕ್ಷ್ಮ ತತ್ವಗಳನ್ನು ವಿವರವಾಗಿ ಮನವರಿಕೆ ಮಾಡಿಕೊಂಡು ,ನಂತರ ಅದನ್ನು ನಿಜ ಜೀವನದಲ್ಲಿ-ನಮ್ಮ ನಿತ್ಯದ ಜೀವನದಲ್ಲಿ ಆ ಯೋಚನೆಗಳನ್ನು Practicle ಆಗಿ ಅಳವಡಿಸಿಕೊಳ್ಳಲು ಹಾಗೂ ಮನನ ಮಾಡಲು. ಆದಷ್ಟು emotional ವಿಚಾರಗಳಿಂದ ಹೊರಗಿದ್ದು ಸತ್ಯವನ್ನು ಅರಿಯುವುದರ ಕಡೆಗೆ ಎಲ್ಲರೂ ರೂಪಿಸಿಕೊಳ್ಳುವಂತೆ ಇರುತ್ತದೆ.
ಸ್ವಯಂಪಾಕವನ್ನು ಪಾಲನೆ ಮಾಡುತ್ತಿರುವುದರಿಂದ ಮತ್ತು ಪಾಠಗಳ ಒಂದು ಸಮಯ ಪಾಲನೆಗೆ ಯಜ್ಞ ,ಪೌರೋಹಿತ್ಯಇತ್ಯಾದಿ ವೃತ್ತಿಯನ್ನು ನಾನು ಅನುಸರಿಸುತ್ತಿಲ್ಲ ಕೇವಲ ಪಾಠಗಳನ್ನು ಹೇಳುತ್ತಾ ಮತ್ತು ಉಪಜೀವನಕ್ಕಾಗಿ ಮಧುಕರಿ ವೃತ್ತಿಯನ್ನು ಅನುಸರಿಸಿಕೊಂಡು ಇದ್ದೇನೆ.

ವಾಸುದೇವತೀರ್ಥ ಇದು ನಮ್ಮ ಪುಟ್ಟದಾದಂತಹ ಗುರುಕುಲ.4 ಮಕ್ಕಳಿಗೆ ಜ್ಞಾನ ದಾನವನ್ನು ಮಾಡುವ ಒಂದು ಭಾಗ್ಯವನ್ನು ಭಗವಂತ ಕರುಣಿಸಿದ್ದಾನೆ. ಇದಲ್ಲದೆ ಆ ವಾಸುದೇವತೀರ್ಥ ಗುರುಕುಲವು .Online ಮೂಲಕವೂ ಕೂಡ ಹಲವಾರು ಜ್ಞಾನಪೀಪಾಸಗಳಿಗೆ ಜ್ಞಾನದಾನವನ್ನು ಮಾಡುವುದರಲ್ಲಿ ತೊಡಗಿಸಿಕೊಂಡಿದೆ. ವಾಸುದೇವ ತೀರ್ಥದಲ್ಲಿ ನಡೆಯುವ Online ಪಾಠಗಳ ಒಂದು ಚಿತ್ರಣವನ್ನು ಕೆಳಗೆ ನೋಡಬಹುದು.
ವಾಸುದೇವತೀರ್ಥ ಗುರುಕುಲದಲ್ಲಿ ನಡೆಯುವ ಪಾಠಗಳು*,

ಸೋಮ-ಶುಕ್ರ
  Updated on 04-03-2025

*5.45-6.00AM*: ಸುಮಧ್ವವಿಜಯ ಅರ್ಥಚಿಂತನೆ
ಸುಮಧ್ವವಿಜಯ ಇದು ಪ್ರತಿ ಪುರುಷನ ಮಂಗಳವನ್ನು ನಿರ್ಧರಿಸುವ ಗ್ರಂಥ. ಈ ಗ್ರಂಥದ ಶ್ಲೋಕಗಳ ಚಿಂತನೆಯನ್ನು ನಿತ್ಯವೂ ಬೆಳಗ್ಗೆ ನಡೆಸಲಾಗುತ್ತದೆ.

*6.15-6.50AM*:  ಉಪನಿಷತ್ ಪಾಠ( ಪ್ರಸಕ್ತ ಮಾಂಡುಕ ನಡೆಯುತ್ತಿದೆ )
10 ಉಪನಿಷತ್ತುಗಳಿಗೆ ಆಚಾರ್ಯರು  ಭಾಷ್ಯವನ್ನು ಬರೆದಿದ್ದಾರೆ. ಈ ಸಂಪೂರ್ಣ ಹತ್ತು ಉಪನಿಷತ್ತುಗಳ ಸರಣಿಯಲ್ಲಿ ನಾಲ್ಕನೇ ಉಪನಿಷತ್ತು ಈಗ ಮುಂದುವರೆಯುತ್ತಿದೆ .ಇದನ್ನು .ಟೀಕಾರಾಯರ, ವಾದಿರಾಜರ ,ರಾಘವೇಂದ್ರ ಸ್ವಾಮಿಗಳ,  ವೇದೇಶತೀರ್ಥರ ಇತ್ಯಾದಿ  ವ್ಯಾಖ್ಯಾನಗಳ ತಳಹದಿಯಲ್ಲಿ ನಿರೂಪಿಸಲಾಗಿದೆ.

*6.50-7.30AM*:ಬ್ರಹ್ಮಸೂತ್ರಭಾಷ್ಯ - ತತ್ವಪ್ರಕಾಶಿಕಾ.
ಬ್ರಹ್ಮಸೂತ್ರಭಾಷ್ಯ ತತ್ವಪ್ರಕಾಶಿಕೆ ಇದೊಂದು ದೀರ್ಘ ವಾದಂತಹ ತಳಹದಿ ಇರುವಂತಹ ಗ್ರಂಥ. ಆಚಾರ್ಯರೇ ಸೂತ್ರಗಳನ್ನು ಅರ್ಥೈಸಲು ನಾಲ್ಕು ಗ್ರಂಥಗಳನ್ನು ರಚಿಸಿದ್ದಾರೆ. ಅದರಲ್ಲಿ ಬ್ರಹ್ಮಸೂತ್ರಭಾಷ್ಯವು ಕೂಡ ಒಂದು. ಸಂಪೂರ್ಣ ಸೂತ್ರ.ಭಾಷ್ಯ- ತತ್ವಪ್ರಕಾಶಿಕ ಸಹಿತವಾಗಿ ಪಾಠ ಹೇಳುವ ನಿಟ್ಟಿನಲ್ಲಿ ಪ್ರಾರಂಭವಾಗಿದೆ. ಒಂದನೇ ಅಧ್ಯಾಯ ಮುಗಿಯುವ ಅವಧಿಯಲ್ಲಿದೆ ನಂತರ ಚಂದ್ರಿಕಾ ಪಾಠವು ನಡೆಸುವ ಚಿಂತನೆ ಇದೆ.

ದಿನದಲ್ಲಿ ಮಕ್ಕಳಿಗೆ  ಶಾಸ್ತ್ರ ಪಾಠ , ವೇದ ಪಾಠ ಮತ್ತು ಚಿಂತನೆಗಳು ಇರುತ್ತವೆ.

*8.00-8.20PM*: ಸದಾಚಾರ ಸ್ಮೃತಿ (ಮಕ್ಕಳ ಪಾಠಗಳು-ಮಂತ್ರಗಳ ಕಂಠಪಾಠ ಸಹಿತ).
ನಿತ್ಯ ಕರ್ಮಗಳ ವಿಧಿಗಳು ಇತ್ಯಾದಿಗಳ ಪರಿಚಯ ಮಕ್ಕಳ ಸ್ಥರದಲ್ಲಿ ರೂಪಿಸಲಾಗಿದೆ..

*8.20-8.50PM*: ಪ್ರಮಾಣಪದ್ಧತಿ 
 ಉಪನೀತ ಮಕ್ಕಳಿಗೆ ಆಚಾರ್ಯರ ಗ್ರಂಥಗಳ ಅಧ್ಯಯನಕ್ಕೆ ಬೇಕಾಗುವ ವ್ಯುತ್ಪತ್ತಿ ಗೋಸ್ಕರ ಹಲವಾರು ಗ್ರಂಥಗಳ ಪಾಠವು ಪ್ರಾರಂಭವಾಗಿದೆ. ಪ್ರಸಕ್ತ ಪ್ರಮಾಣಪದ್ಧತಿಯ  ಅನುಮಾನ ಪ್ರಕರಣ ಪಾಠವನ್ನು ಹೇಳುತ್ತಿದ್ದೇನೆ.

*9.00 - 9.30PM* -ನ್ಯಾಯಸುಧಾ.
ನ್ಯಾಯಸುಧಾ  ಒಂದು ಕಬ್ಬಿಣದ ಕಡಲೆಯಂತಹ  ಗ್ರಂಥ. .ಇಂದಿನ ದಿನದಲ್ಲಂತೂ  ಇದನ್ನು ಓದಿದವನೇ ವಿದ್ವಾಂಸ ಎಂಬ ಸಾಮಾನ್ಯ ವಾಡಿಕೆ ಇದೆ. ಸಂಸ್ಕೃತದ ಜ್ಞಾನವಿಲ್ಲದವರು ಕೂಡ ಸುಲಭವಾಗಿ  ಅರ್ಥ ಮಾಡಿಕೊಳ್ಳಲು ಸರಳ ರೀತಿಯಲ್ಲಿ ಸುಧಾ ಪಾಠವನ್ನು ರೂಪಿಸಲಾಗಿದೆ..30

*3.30 - 4.00PM*- ಷೋಡಶಿ. (ಮಂಗಳವಾರ , ಬುದವಾರ ಮತ್ತು ಗುರುವಾರ)
ಮಾದನೂರ್ ವಿಷ್ಣುತೀರ್ಥರು ರಚಿಸಿರುವ ಆಧ್ಯಾತ್ಮದ ರಹಸ್ಯಗಳನ್ನು ಒಳಗೊಂಡಿರುವ ಅಪರೂಪದ ಗ್ರಂಥ.


ಶನಿವಾರ ಮತ್ತು ಭಾನುವಾರ

*7.30 -9.30 AM* - ಹರಿಕಥಾಮೃತಸಾರ ಪಾಠ (ಪ್ರತಿ  ಶನಿವಾರ ಮಾತ್ರ)
ಸುಮಾರು ಎಂಟು.-ಹತ್ತು ವ್ಯಾಖ್ಯಾನಗಳಿರುವಂತಹ, ಕನ್ನಡ-ಸಂಸ್ಕೃತ ವ್ಯಾಖ್ಯಾನ ಸಹಿತ ಇರುವ ಜಗನ್ನಾಥದಾಸರ ಈ ಒಂದು ಅದ್ಭುತ ಈ ಗ್ರಂಥದ ಪಾಠವನ್ನು   ಸಂಶೋಧನಾತ್ಮಕವಾಗಿ ರೂಪಿಸಲಾಗಿದೆ.

*7.30-9.30AM*- ವಿಷ್ಣುತತ್ವನಿರ್ಣಯ ಪಾಠ (ಪ್ರತಿ  ಭಾನುವಾರ ಮಾತ್ರ)
ವಿಷ್ಣುತತ್ವನಿರ್ಣಯ ಇದೊಂದು ಅಮೋಘವಾದ ಗ್ರಂಥ ಇದನ್ನು ಓದದೆ ಇರುವವ ಅವನೆಂದು ಕೂಡ ನಂಬಿಕೆಯ ತಳಹದಿಯನ್ನು ,ಭಗವಂತನ ಇರುವಿಕೆಯನ್ನು ,ಅನ್ಯಮತಗಳ ಸಮಸ್ಯೆಗಳನ್ನು ಅರಿತುಕೊಳ್ಳುವುದಕ್ಕೆ ಸಾಧ್ಯವಿಲ್ಲ .ಹಾಗಾಗಿ ಜಿಜ್ಞಾಸುಗಳಿಗೆ ಮಧ್ವಾಚಾರ್ಯರ ಈ ಗ್ರಂಥದ ಅಧ್ಯಯನಕ್ಕಾಗಿ ಪಾಠವನ್ನು ರೂಪಿಸಲಾಗಿದೆ.

*8.30 - 9.30PM*: ಭಗವತ್ಗೀತ (ಪ್ರಸಕ್ತ 3 ನೇ ಅಧ್ಯಾಯ)
9.30-10.00: ಪ್ರಶ್ನೋತ್ತರ 




 

Online ಮತ್ತು Offline ಭಾಗವಹಿಸಲು ಅವಕಾಶವಿರುತ್ತದೆ. Full Time ವಿದ್ಯಾರ್ಥಿಗಳ ಕೆಲವು ತರಗತಿಗಳನ್ನು ಮಾತ್ರ ಭಾಗವಹಿಸಲು ಅವಕಾಶವಿರುತ್ತದೆ.

Online : *Google meet*.

ಎಲ್ಲಾ ಪಾಠಗಳನ್ನು Telegram Group and Spotify ನಲ್ಲಿ ಸೇವ್ ಮಾಡಲಾಗುತ್ತದೆ. ಎಲ್ಲ ಪಾಠಗಳಿಗೆ ಪ್ರತ್ಯೇಕ WhatsApp Group ಮಾಡಲಾಗಿದೆ. ಆಸಕ್ತರು ಕೆಳಗಿನ ದೂರವಾಣಿಗೆ ನಿಮ್ಮ ಗೋತ್ರ ಮತ್ತು ಊರು  message ಮಾಡುವ ಮೂಲಕ ಸೇರಬಹುದು.


ಭಾಗವಹಿಸಲು ಸಂಪರ್ಕಿಸಿ :
*ಕಂಪ್ಲಿ ಶೇಷಗಿರಿ ಆಚಾರ್ಯ ಜೋಯಿಸ್*.
WhatsApp:9964069933

ಮಧ್ವಾಚಾರ್ಯರು ಹೇಳಿದಂತೆ ಸ್ತ್ರೀ-ಶೂದ್ರರಿಗೂ ಕೂಡ ಜ್ಞಾನದಲ್ಲಿ ಅಧಿಕಾರ ಇದೆ ಎಂಬುದನ್ನು ಮನಗಂಡು "ಸ್ತ್ರೀ ಶೂದ್ರಾಣಾಂಚ ಧರ್ಮ ಜ್ಞಾನ ದ್ವಾರ ಮೋಕ್ಷ: ಭವೇತ್" ಎಂಬ ಗೀತಾಭಾಷ್ಯಯದ  ಅವರ ವಚನವನ್ನು ಅನುಸರಿಸಿ ನಾನು ಹೇಳುವ ಕೆಲವು ಪಾಠಗಳನ್ನು ಹರಿಕಥಾಮೃತಸಾರ ಅಥವಾ ಮಧ್ವಸಿದ್ಧಾಂತಸಾರ ಈ ಪಾಠಗಳನ್ನು ಸ್ತ್ರೀಯರಿಗೂ ಹಾಗೂ: ಬ್ರಾಹ್ಮಣೇತರ ವರ್ಗಕ್ಕೂ ಕೂಡ ಅನುಕೂಲವಾಗುವಂತೆ ಹೇಳುತ್ತಿದ್ದೇನೆ.




ಏನಿದು ಮಧುಕರ ವೃತ್ತಿ:

ಮಧುಕರಿ ವೃತ್ತಿಯನ್ನು ಆಶ್ರಯಿಸಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಒಬ್ಬರ ಮನೆಗೆ ಹೋಗುತ್ತೇನೆ (ಕೆಲವರ ಅಪೇಕ್ಷೆಯಂತೆ ತಿಂಗಳಿಗೊಮ್ಮೆ). ಒಂದು ಗಂಟೆಗಳ ಕಾಲ ಭಾಗವತ, ಭಗವದ್ಗೀತಾ ಅಥವಾ ಅಪೇಕ್ಷಿತವಾದ ಒಂದು ಶಾಸ್ತ್ರದ ವಿಚಾರದ ಪ್ರವಚನ ಹಾಗೂ ಚರ್ಚೆಯನ್ನು ನಡೆಸಿ ಅವರ ಕೊಟ್ಟಂತಹ ದಕ್ಷಣೆಯನ್ನು ಸ್ವೀಕರಿಸಿ ಉಪಜೀವನವನ್ನು ನಡೆಸುತ್ತಿದ್ದೇನೆ.

 

ಹಾಗಾಗಿ ನೀವು ಅಥವ ನಿಮ್ಮ ಪರಿಚಯಸ್ತರು ಯಾರಾದರೂ ಈ ಒಂದು ನನ್ನ ಕಾರ್ಯಕ್ರಮಗಳ., ಗುರುಕುಲದ Online ಪಾಠಗಳ  ಮತ್ತು ನಿಮ್ಮ ಮನೆಯಗಳಲ್ಲಿ ವಾರದ ಪರಿಯಂತ ಭಾಗವತಾದಿ ಸಪ್ತಹ ಗಳನ್ನು ನಡೆಸಲು ಇಚ್ಚೆಯಿದ್ದರೆ ಅವರಿಗೆ ತಿಳಿಸಿ..
 
 ಇಲ್ಲಿ ಮುದುಕರಿ ವೃತ್ತಿಯಲ್ಲಿ ಕೇವಲ ಇದು ಪ್ರವಚನವಾಗಿರದೆ., ಒಂದು ಚರ್ಚಾ ರೂಪವಾದ ವಾತಾವರಣವಿರುತ್ತದೆ. ಹಾಗಾಗಿ ಅಪೇಕ್ಷಿತರು ಆ ವಿಷಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಮತ್ತು ಉತ್ತರಗಳ ಒಂದು ಚರ್ಚ ಮಾಡಲು ಅವಕಾಶವಿರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಸ್ತ್ರೀಯರು., ಬಾಲಕರು ಹಾಗೂ ವೃದ್ಧರು ಎಲ್ಲರು ಕೂಡ ಸೌಹಾರ್ದತೆಯಿಂದ ತಮ್ಮ ಕುತೂಹಲವನ್ನು ಪ್ರಶ್ನಿಸುತ್ತಾ ಚರ್ಚೆಗಳನ್ನು ನಡೆಸುತ್ತಾರೆ


ಮಧುಕರ ವೃತ್ತಿಯ ಶಾಸ್ತ್ರೀಯ ಹಿನ್ನೆಲೆ


ಯುವ-ಆಧ್ಯಾತ್ಮಚಿಂತನ ಎಂಬ Youtube channel ಅನ್ನು ಇಂದಿನ ಯುವಕರಿಗೆ -ಯುವತಿಯರಿಗೆ- ಮಕ್ಕಳಿಗೆ ಆಸ್ತಿಕತೆಯ ವಿಚಾರಗಳು ಮೊಳೆಯಲಿ ಎಂದು Video ಗಳನ್ನು ಮಾಡಿದ್ದೇನೆ.


ನಿರಂತರವಾದ Youtube video ಗಳಿಗೆ ನಮ್ಮ channel ಅನ್ನು Subscribe ಮಾಡಿಕೊಳ್ಳಬಹುದು .


Sample Video:


https://youtu.be/SSqd8sNRQvY


                sheshagiri


Kampli Sheshagiri Achar Jois,

#970-15, 10th main,.road opp to Kusuma hospital pharmacy,Raghavendra block , Srinagara ,Bangalore -560050. ಪಾಠ - ಪ್ರವಚನ/ಮಧುಕರ ವೃತ್ತಿ Mob / WhatsApp./phonepe: 9964069933

For online Donation:

Name:Sheshagiri J

A/c No: 10235568766

IFSC:SBIN0007637

BRANCH: SBI, SRINAGAR





Comments

  1. ಹರೇ ಶ್ರೀನಿವಾಸ 🙏ತುಂಬಾ ಸಂತೋಷ. ದೇವರ ಸೇವೆಗಾಗಿ ನಿಮ್ಮ ಜೀವನವನ್ನು ಮುಡಿಪು ಇಟ್ಟಿದ್ದು. ಆಧುನಿಕತೆಯ, ಧರ್ಮ ಕ್ಷೀಣವಾಗುತ್ತಿರುವ ಈ ಕಾಲದಲ್ಲಿ ನಿಮ್ಮಂಥ ಭಕ್ತರು ಅಪರೂಪ. ನಿಮ್ಮ ಧಾರ್ಮಿಕ, ಆಧ್ಯಾತ್ಮಿಕ ಸೇವೆಗಳು ಶ್ರೀ ಹರಿ ದಯೆಯಿಂದ ಸದಾ ಕಾಲ ನಿರ್ವಿಘ್ನವಾಗಿ ನಡೆಯಲಿ.🙏ಮಧುಕರ ವೃತ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೀರಾ?
    ಹರೇ ಶ್ರೀನಿವಾಸ 🙏

    ReplyDelete
    Replies
    1. ನಿಮ್ಮ ಜೀವನದ ಘಟನೆ ಕೇಳಿ ತುಂಬಾ ವಿಚಿತ್ರ ಅನಿಸಿತು ಭಗವಂತನ ಲೀಲೆ ತುಂಬಾ ದೊಡ್ಡದು ಅವನು ಆಡಿಸಿದ ಹಾಗೇ ಅಡಬೇಕು ಹರೇ ಶ್ರೀನಿವಾಸ🙏🙏

      Delete
    2. ಮಧುಕರ ವೃತ್ತಿಯ ಪೂರ್ಣ ಮಾಹಿತಿಯನ್ನು ಸಧ್ಯದಲ್ಲಿಯೇ YouTube , Blog ಮೂಲಕ ನೀಡುತ್ತೇನೆ

      Delete
  2. ಅದ್ಭುತವಾದ ನಿರ್ಧಾರ ಕೈಗೊಂಡು ಮುಂದಡಿ ಇಡುವ ಮೂಲಕ ನಿಜಾರ್ಥದ ಭಗವತ್ಪೂಜೆ ನಡೆಸುತ್ತಿರುವಿರಿ. ಈ ಫೂಜೆಯ ಪುಷ್ಪವಾಗುವ ಭಾಗ್ಯವನ್ನು ನಮಗೂ ಒದಗಿಸಿ.
    ಪ್ರಣಾಮಗಳು.
    ಜಿತಾಮಿತ್ರ
    9731982232

    ReplyDelete
    Replies
    1. ಎಲ್ಲಾ ನಮ್ಮ ಗುರುಗಳ ಅನುಗ್ರಹ. ಮುಂದೆ ಮತ್ತೆ ನಿಮ್ಮನ್ನು ಸಂಪರ್ಕಿಸುತ್ತೇನೆ

      Delete
  3. ನಿಜಕ್ಕೂ ಅದ್ಭುತವಾದ ಪರಿವರ್ತನೆ, ಸಮುದಾಯಕ್ಕೆ ನಿಮ್ಮ ಮಾರ್ಗದರ್ಶನ ಅವಶ್ಯ. ಇಷ್ಟು ಚಿಕ್ಕ ವಯಸ್ಸಿನಲ್ಲೇ ತುಂಬಾ ಸಾಧನೆ. ಶ್ರೀಹರಿ ನಿಮಗೆ ಎಲ್ಲಾ ಸಹಕಾರ ನೀಡಲೆಂದು ಪ್ರಾರ್ಥನೆ. ನಿಮ್ಮ ಈ ಸಾಧನೆಯ ಹಾದಿಗೆ ನಮ್ಮ ಮಹಾಸಭಾದ ಸಂಪೂರ್ಣ ಬೆಂಬಲ. ನಿಮ್ಮ ಜೊತೆಗೆ ನಾವಿದ್ದೇವೆ.
    ಮುರುಳಿದರ,
    ಅಧ್ಯಕ್ಷರು,
    ಅಖಿಲ ಕರ್ನಾಟಕ ಮಾಧ್ವ ಮಹಾ ಸಭಾ.
    9341967809.

    ReplyDelete
  4. Send me your phone no & address my no 9844169412 madhava murthy. I will meet you .we have a trust running for Sri Guru Raghavendra Swamy Brundavana in Alur post off tumkur road bangalore .

    ReplyDelete
  5. Name.KN Ranganath.mobile

    9845271625

    Contact me Through WhatsUp🙏

    ReplyDelete
  6. Thank you very much. With very humble pranams, I like to invite you for 1/2 hour discourse in my house. Please guide me the formalities. (My No.8548006418)

    ReplyDelete
  7. You can contact Vidyapeetha near by your house, Shri pejawar swamiji will definitely provide opportunities for your learning and earnings through regular PAATHA and PRAVACHANA apart from giving PRAVACHANA at various Rayaramutts and Madhava Sanghas in Bangalore.

    ReplyDelete
  8. Hare srinivasa
    Please connect me @ Raghavendra-9740413603

    ReplyDelete
  9. ಮಾನವ ಬದುಕಿನ ಉದ್ದೇಶವು ಭಗವನ್ನಾಮ ಸ್ಮರಣೆಯಿಂದ ಅವನ ಧಾಮವನ್ನು ಸೇರುವುದೇ ಆಗಿದ್ದು...ಈ ದಾರಿಯಲ್ಲಿ ನೀವು ನಮ್ಮನ್ನೆಲ್ಲಾ ಕೊಂಡೊಯ್ಯುತ್ತಿರುವುದು ನಮ್ಮ ಪೂರ್ವ ಜನ್ಮದ ಸುಕೃತವೇ ಸರಿ ಗುರುಗಳೆ.....ಹರೇ ಕೃಷ್ಣ

    ReplyDelete
  10. ಧನ್ಯವಾದಗಳು ಕಂಪ್ಲಿ ಆಚಾರ್ಯರಿಗೆ ಹಾಗೂ ನಮಸ್ಕಾರಗಳು. ನಾನು ಹನುಮೇಶ, ಮೈಸೂರಿನಿಂದ. ನಿಮ್ಮ ಜೀವನದಲ್ಲಿ ತಿರುವು ಬಂದ ಕಾರಣ ನಿಮ್ಮ ದೃಢ ನಿರ್ಧಾರ. ಭಗವಂತ ಯಾವಾಗ ಮತ್ತು ಹೇಗೆ ಪ್ರೇರಣೆ ಮಾಡುವನೋ ಅವನೇ ಬಲ್ಲ. ಗೀತೆಯಲ್ಲಿ ಅವನೇ ಹೇಳಿದ್ದಾನೆ "ನಾ ಮೇ ಭಕ್ತ: ಪ್ರಣಶ್ಯತಿ" ಎಂದು. ನಿಮ್ಮ ಅಚಲವಾದ ಸಂಕಲ್ಪಕ್ಕೆ ತನ್ನತ್ತ ಸೆಳೆದಿದ್ದಾನೆ. ಅವನ ಕೃಪೆಗೆ ಪಾತ್ರರಾಗಿದ್ದೀರ. ಸಂತೋಷ.
    ಮುಂದೆಯೂ ತನ್ನೆಡೆಗೆ ಕರೆದೊಯ್ಯುತ್ತಾನೆ ಮತ್ತು ಜೀವನವನ್ನೂ ಸುಖಮಯವಾಗಿಸುತ್ತಾನೆ. ಅದಕ್ಕೆ ಅವನೇ ಗ್ಯಾರಂಟಿ. ಶುಭವಾಗಲಿ ಎಂದು ಅವನನ್ನೇ ಪ್ರಾರ್ಥಿಸುತ್ತೇನೆ.

    ReplyDelete
  11. Please make two options in the top English and Kannada, on click of English give this full content in English so that people who don't know kannada can also read about your life and join your patha

    ReplyDelete
  12. ನಮಸ್ಕಾರ ಆಚಾರ್ಯರಿಗೆ, ನಿಮ್ಮನ್ನು ಕಂಪ್ಲಿ ಟ್ ಆಚಾರ್ಯ ಎನ್ನಬಹುದು ಈ ದೃಢ ನಿರ್ಧಾರ ಲೌಕಿಕ ಜಗತ್ತಿನಿಂದ , ಶಾಸ್ತ್ರ ಪಾಠ ಹಾಗೂ ಮದುಕರ ವೃತ್ತಿ ಇಂದ ಜೀವನ ನಡೆಸುವಿಕೆ ಇದರಬಗ್ಗೆ ಕೇಳಿ ಬಹಳ ಆಶ್ಚರ್ಯಾ ಆಗುತ್ತೆ. ನನಗು ತಮ್ಮಿಂದ ಪಾಠ ಕೇಳುವ ಇಚ್ಛೆಇದೆ. ದಯವಿಟ್ಟು ಹ್ಯಾಗೆ ಎಂದು ತಿಳಿಸಿ. ತುಳಸಿದಳ ಕಳಿಸಬಹುದಾ?

    ReplyDelete

Post a Comment

Popular posts from this blog

[ENGLISH]My Introduction: Kampli Sheshagiri Acharya Jois