[KANNADA]ನನ್ನ ಪರಿಚಯ
ಹರೇ ಕೃಷ್ಣ ,
ನನ್ನ ಪರಿಚಯ:
ನಾನು ಕಂಪ್ಲಿ ಶೇಷಗಿರಿಆಚಾರ್ ಜೋಯಿಸ್ , ನನಗೆ ಈಗ 37 ವರ್ಷ . ನಾನು, ನನ್ನ ತಂದೆ-ತಾಯಿ , ಪತ್ನಿ, ಮಗ (7 ವರ್ಷ), ಮಗಳು (3 ವರ್ಷ ) ಬೆಂಗಳೂರ್ ಅಲ್ಲಿ ವಾಸವಾಗಿದ್ದೇವೆ. ಲೌಕಿಕ ವೃತ್ತಿಯನ್ನು ತೊರೆದು , ವೈದಿಕ ಜೀವನವನ್ನು ನಡೆಸುತ್ತಿದ್ದೇನೆ . ಮಧುಕರ ವೃತ್ತಿಯನ್ನು ಆರಿಸಿ ಉಪಜೀವನವನ್ನು ಸಾಗಿಸುತ್ತಿದ್ದೇನೆ. ಗುರುಗಳ ಅನುಗ್ರಹ ಈ ಸೌಭಾಗ್ಯ ದೊರೆಯಿತು .
ನಾನು ಏನು ಮಾಡಬೇಕು?
ಯಾವುದು ನನ್ನ ಧರ್ಮ?
ಈ ಜನ್ಮದಲ್ಲಿ ಏನು ಮಾಡಿದರೆ Value Addition ಆಗುತ್ತದೆ ?
ಹೀಗೆ ಸೂಕ್ಷ್ಮವಾಗಿ ಯೋಚಿಸುವ ಹಂಬಲ ದಿನೇ ದಿನೇ ಹೆಚ್ಚಾಗುತ್ತಿತ್ತು
ಇದು ಇಂದಿನ ಯೋಚನೆ ಅಲ್ಲ ,ಸುಮಾರು ನಾನು 7ನೇ ತರಗತಿ ಓದುತಿದ್ದಾಗ ನನಗೆ ನಿರಂತರ ಪ್ರಶ್ನೆಗಳು ಕಾಡುತ್ತಿದ್ದವು. ಯಾರು ನಾನು ? ದೇವರು ಏಕೆ ಬೇಕು ? ಎಲ್ಲ ಮತಗಳಲ್ಲಿಯೂ ರಾಘವೇಂದ್ರ ಸ್ವಾಮಿಗಳಂತೆ ಪವಾಡ ಪುರುಷರಿದ್ದಾರೆ, ಹಾಗಾದರೆ ನಮ್ಮ ಮತವೇ ಸರಿ ಎಂದು ಹೇಳುವುದು ಎಷ್ಟು ಉಚಿತ ? ಯಾಕೆ ನಾನು ಜುಟ್ಟು(ಶಿಖೆ) ಬಿಡಬೇಕು? ಯಾಕೆ ಆಚೆ ತಿನ್ನಬಾರದು? ಸಿನಿಮಾ ಏಕೆ ನೋಡಬಾರದು? ಮಂತ್ರಗಳನ್ನ ಏಕೆ ಹೇಳಬೇಕು ..... ಹೀಗೆ ನೂರಾರು ಪ್ರಶ್ನೆಗಳು ಪೀಡಿಸುತ್ತಿದ್ದವು ..
ಚಿಕ್ಕ ಊರು , ಎಲ್ಲಿಯೂ ಸರಿಯಾದ ಉತ್ತರಗಳು ಸಿಗುತ್ತಿರಲಿಲ್ಲ. ಕೆಲವೊಮ್ಮೆ ಸಂಶಯಗಳು ಪ್ರಶ್ನೆರೂಪ ತಾಳಲು ಅಸಮರ್ಥ ವಾಗಿಬಿಡುತಿದ್ದವು. ಅಪ್ರಬುದ್ದ ಮನಸ್ಸು ಯಾವುದನ್ನೂ ಸರಿಯಾಗಿ ನಿರ್ಧರಿಸಲಾಗದೆ ಮುಂದೆ ಮುಂದೆ ತಳ್ಳುತ್ತಿತ್ತು.
ಹೀಗೆ ಕಾಲದ ಪ್ರವಾಹದಲ್ಲಿ ಲೌಕಿಕ ವಿದ್ಯಾಭ್ಯಾಸ ನಡೆಯುತ್ತಾ ಬಂತು. ಹೀಗೆ ಒಮ್ಮೆ ಕಂಪ್ಲಿಯಲ್ಲಿರುವ ಇಷ್ಟದೇವರ ಪೂಜೆಮಾಡುವ ಅವಕಾಶ ದೊರೆಯಿತು. ಸುಮಾರು 1 ವಾರ ಪೂಜೆ ಮಾಡಿದೆ . ನಂತರ ನಾನು ಪಡೆದ ಬದಲಾವಣೆಗಳೇ ಬೇರೆ. ದಯಾಸಿಂಧುವಾದ ಅವನ ಸ್ಪರ್ಶದಿಂದ , ನನ್ನ ಶಾಸ್ತ್ರಾಧ್ಯಯನಕ್ಕೆ ಇದ್ದ ಅನಂತ ಪಾಪಗಳು ನಾಶವಾದವು. ಗುರುಗಳ ಸಂಪರ್ಕವಾಯಿತು. ಚೆನ್ನಾಗಿ ಅಧ್ಯಯನ ಮುಂದುವರೆಯಿತು. .
ನನ್ನ 10ನೇ ತರಗತಿ ವರೆಗೆ ಬಳ್ಳಾರಿ ಹತ್ತಿರದ ಕಂಪ್ಲಿ ಎಂಬ ಊರಿನಲ್ಲಿ ಶಿಕ್ಷಣವನ್ನು ಮುಗಿಸಿದೆ. ಕಂಪ್ಲಿ ಇದೊಂದು ಅದ್ಭುತವಾದಂತಹ ಕ್ಷೇತ್ರ. ನನ್ನ ಬಾಲ್ಯವೆಲ್ಲವೂ ಕೂಡ ಈ ಊರಿನಲ್ಲಿ ಕಳೆಯಿತು. ತುಂಗಭದ್ರಾನದಿಯ ತೀರ, ಪುಟ್ಟದಾದ ಶ್ರೀನಿವಾಸನ ದೇವಸ್ಥಾನ, ಮನೆ ತುಂಬಾ 15-20 ಗೋವುಗಳು, ಎಲ್ಲರೂ ಸೇರಿ ಇರುವಂತಹ ತುಂಬು ಕುಟುಂಬ, ಎಲ್ಲಾ ಹಬ್ಬಗಳಿಗೆ ತುಂಬಿ ತುಳುಕುತ್ತಿದ್ದ ಬಂಧು-ಬಳಗದವರು, ತುಳಸಿಯ ಸೇವೆ, ಬ್ರಾಹ್ಮಣರ ಸೇವೆ -ಹೀಗೆ ಒಂದು ಕರ್ಮಯೋಗಕ್ಕೆ ಹೇಳಿ ಮಾಡಿಸಿದಂತಹ ಅದ್ಭುತವಾದಂತಹ ತಾಣ.
ಒಂದು ಕಡೆ ನೋಡಿದರೆ 10 ಕಿ. ಮೀ ದೂರದಲ್ಲಿ ಮಹಾ ಮಹಾ ಜ್ಞಾನಿಗಳ ತಪೋಭೂಮಿಯಾದ ನವಬೃಂದಾವನ ಗಡ್ಡೆ ,ಇನ್ನೊಂದು ದಿಕ್ಕಿನಲ್ಲಿ 10 ಕಿ.ಮೀ ದೂರದಲ್ಲಿ ಪವಿತ್ರವಾದಂತಹ ವ್ಯಾಸರಾಜರ ಪ್ರಾಣದೇವರ ಹಾಗೂ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರದೇವರ ಕಾರ್ಯಕ್ಷೇತ್ರವಾದ ,ರುದ್ರದೇವರ ತಪೋಭೂಮಿಯಾದ ಹಂಪೆ, ಈ ಕ್ಷೇತ್ರಗಳ ನಿರಂತರ ಒಡನಾಟ ಚಿಕ್ಕಂದಿನಿಂದಲೇ ಬಹಳ ಪ್ರಭಾವ ಬೀರಿತ್ತು.
ನಂತರ PUC (Science) ಓದಿಗಾಗಿ ಬೆಂಗಳೂರ್ ನಗರಕ್ಕೆ ಬಂದೆ. II PUC ಯಲ್ಲಿ PCM ಶೇ 94% ಅಂಕ ಪಡೆದು ನಂತರ ಇಂಜಿನೀರಿಂಗ್(B.E in Electronics and Communication) ಶಿಕ್ಷಣಕ್ಕೆ ಪ್ರವೇಶ ಪಡೆದೆ. ನಂತರ ಅಧ್ಯಯನಕ್ಕೆ ಅನುಕೂಲವಾಗಲೆಂದು Lecturer ಹುದ್ದೆ ಪಡೆಯಲು M.Tech ಮಾಡಲು ನಿರ್ಧರಿಸಿದೆ. ಹಾಗೆಯೇ M.Tech in VLSI & Embedded System Design ವಿಷಯದಲ್ಲಿ 2012 Distinction ಅಲ್ಲಿ ಮುಗಿಸಿದೆ. 2012-2019ರ ವರೆಗೆ ಮೈಸೂರಿನ Maharaja Institute of Technology Mysore ಎಂಬ ಪ್ರತಿಷ್ಠಿತ Engineering Collegeನಲ್ಲಿ Professor ಆಗಿ ಕೆಲಸ ಮಾಡಿದೆ.
ಲೌಕಿಕ ಮತ್ತು ವೈದಿಕ ಎರಡನ್ನೂ ಸಮವಾಗಿ ತೂಗಿಸುತಿದ್ದೆ. ಮೈಸೂರ್ ಅಲ್ಲಿ ಕೆಲಸ ಸಿಕ್ಕಿತು. ನನ್ನ ಪೂರ್ವಜನ್ಮದ ಸುಕರ್ಮ ಫಲ ಗಳನ್ನು ಎಂದಿಗೂ ಪರಮಾತ್ಮ ನನಗೆ ಕಾಲ ಕಾಲಕ್ಕೆ ಒದಗಿಸುತ್ತಲೇ ಬಂದಿದ್ದಾನೆ. ಈ ಬಾರಿ ಮೈಸೂರ್ ನಲ್ಲಿ ಮತ್ತೊಂದು ಮಾಹಾಕಾರುಣ್ಯವನ್ನು ಮಾಡಿದ. ಮೈಸೂರ್ ನಲ್ಲಿ ಎಲ್ಲಿ ವಾಸಮಾಡಬೇಕು ? , ಊಟಕ್ಕೆ ಏನು ಮಾಡಲಿ ? ಅಂತ ಚಿಂತಾಕ್ರಾಂತನಾಗಿದ್ದೆ . ಕರ್ಮವಶಾತ್ ವಶಿಷ್ಠರ ಆಶ್ರಮದಂತೆ ತಪೋ ಮೌನದಿಂದ ಸಾತ್ವಿಕತೆಯನ್ನು ದಶದಿಕ್ಕುಗಳಲ್ಲಿ ಹಂಚುವಂತಿದ್ದ ಶ್ರೀಸತ್ಯಸಂಕಲ್ಪರತೀರ್ಥರ ಮಹಾಸನ್ನಿಧಾನಕ್ಕೆ ಭಗವಂತ ನನ್ನನ್ನು enroll ಮಾಡಿಸಿದ. ಇಂದಿಗೂ (2024) ನಿತ್ಯ ಗಂಗಾ ಸನ್ನಿಧಾನ ಸ್ವಾಮಿಗಳ ವೃಂದಾವನದ ಸುತ್ತಲೂ ಇದೆ. ಅಲ್ಲಿ ಇದ್ದ 1 ವರ್ಷ ಅದು ಸ್ವರ್ಗ , ಅದು ವೈಕುಂಠ , ಅದು ಮೋಕ್ಷ ....... ಏನೆಲ್ಲಾ ಹೇಳಿದರು ಸಾಲದು ..
ಹೀಗೆ ಮಠ-college-ಮಠ ಅಂತ ಪ್ರಯಾಣ ನಡೆಯುತ್ತಲೇ ಇತ್ತು . ಒಬ್ಬ ಅವಧೂತರ ಸಂಪರ್ಕ ನನ್ನಲ್ಲಿ ಸಾಕಷ್ಟು ಬದಲಾವಣೆಗಳನ್ನು ಮಾಡಿತು. ನಾನು ಬಹಳ ಪ್ರೀತಿಯಿಂದ ನೋಡುತಿದ್ದ ಭಗವತ್ ಗೀತೆಗೆ ಒಂದು ಉದಾಹರಣೆಯಾಗಿ ಇದ್ದರು.ತಮ್ಮ ಹೆಸರು , ಊರು ಯಾವುದನ್ನೂ ಪ್ರಚಾರಕ್ಕೆ ಅವರು ಬಳೆಸುತ್ತಿರಲಿಲ್ಲ. ಹಾಗಾಗಿ ಅವರ ಬಗ್ಗೆ ನಾನು ವಿಸ್ತಾರವನ್ನು ಬರೆಯುತಿಲ್ಲ.
ದಿನವೂ ಸಂಜೆ ವೃಂದಾವನದ ಮುಂದೆ ಕುಳಿತು ಶ್ರೀ ಮಧ್ವಾಚಾರ್ಯರ ಗೀತಾಭಾಷ್ಯ ಅದಕ್ಕೆ ಟೀಕಾರಾಯರ ಪ್ರಮೇಯದೀಪಿಕಾ ಅದಕ್ಕೆ ಶ್ರೀ ಸುಮತೀಂದ್ರತೀರ್ಥರ - ಶ್ರೀ ಶ್ರೀನಿವಾಸತೀರ್ಥರ etc ದ ಅನುವಾದ ಮಾಡುತ್ತಾ ಕೂಡುತ್ತಿದ್ದೆ . ಮಠಕ್ಕೆ ಬಂದವರಿಗೆ ಸ್ವಾಮಿಗಳ ಮಹತ್ವವನ್ನು ಹೇಳುತಿದ್ದೆ.
college ನಲ್ಲಿ ಒಳ್ಳೆಯ ಹೆಸರು ಇತ್ತು . Embedded Projects ಗೆ ಅಂತ ಇದ್ದ Self Design Lab ಎಂಬ ನಾನು ನಡೆಸುತಿದ್ದ ಪ್ರಯೋಗಾಲಯ ಭಗವತ್ಗೀತಾ lab ಆಗಿ ಮಾರ್ಪಾಡಾಗಿತ್ತು. ಹೆಜ್ಜೆ ಹೆಜ್ಜೆಗೂ ಮನಸ್ಸಿನಲ್ಲಿ ಗೊಂದಲ " ಇದು ನನ್ನ Passion ಅಲ್ಲ. ಇದು ನನ್ನ ವೃತ್ತಿ ಅಲ್ಲ. ಇದು ನನ್ನ Interest ಅಲ್ಲ. ಇದು ನನ್ನ ಸಾಧನಾ ಮಾರ್ಗವಲ್ಲ. Embedded lab ಮಾಡಲು ಸಾವಿರಾರು ಜನರಿದ್ದಾರೆ ಆದರೆ ಲೌಕಿಕ ಶಿಕ್ಷಣ ಮತ್ತು ವೈದಿಕ ಶಿಕ್ಷಣ ಪಡೆದು ಸಮಾಜವನ್ನು ಸರಿಮಾರ್ಗದಲ್ಲಿ ಪ್ರಚೋದಿಸುವವರು ವಿರಳ. ಹಾಗಾಗಿ ಪಾಠ-ಪ್ರವಚನ ಮಾಡುತ್ತಾ ಜೀವನ ಮಾಡಬೇಕು ಮತ್ತು ಗುರುಗಳಿಂದ, ನುರಿತ ಜ್ಞಾನಿಗಳಿಂದ ಮತ್ತಷ್ಟು ಜ್ಞಾನ ಸಂಪಾದನೆ ಮಾಡುತ್ತಾ ಕಾಲ ಕಳೆಯಬೇಕು " ಎಂಬ ಕೊರಗು ದಿನೇ ದಿನೇ ಹೆಚ್ಚುತ್ತಾ ಹೋಯಿತು ..
ಒಂದು ಎರೆಡು ಮೂರು ..ಹೀಗೆ 7 ವರ್ಷಗಳು ಕಳೆದವು. ಮನಸ್ಸಿನ ತೊಳಲಾಟ ಅತಿಯಾಗಿ ಹೋಗಿತ್ತು. ಗುರುಗಳು ಒಂದು ಮಾತು ಹೇಳಿದ್ದರು "ಎರೆಡು ದೋಣಿಯಲ್ಲಿ ಕಾಲು ಇಡಬೇಡ" ಅಂತ. ಆ ಮಾತು ಪದೇ ಪದೇ ಪ್ರತಿಧ್ವನಿಸುತಿತ್ತು. ಸರ್ವಗುರುಗಳ ಅನುಗ್ರಹ - ಪರಮಾತ್ಮನ ದಯೆ ಒಂದು ದಿನ ಬೆಳೆಗ್ಗೆ college ನ ನನ್ನ ಕೊಠಡಿಯಲ್ಲಿ Resignation letter ಬರೆದೆ HOD ಅವರ ಮೂಲಕ Principal ಗೆ ತಲುಪಿಸಿ ನನ್ನ ಲೌಕಿಕದ ಸಂಚಾರ ಮುಗಿಸಿದೆ.
ಚಿಕ್ಕ ಮಕ್ಕಳು, ಮನೆ ಜವಾಬ್ದಾರಿ ,ಮುಂದೆ ಏನು ? ಜೀವನ ಹೇಗೆ? ಎಲ್ಲಿಗೆ ಪ್ರಯಾಣ ? ಎಂಬ ಎಲ್ಲ ಪ್ರಶ್ನೆಗೆ ನಮ್ಮ ಗುರುಗಳು "ನಾಲ್ಕು ಜನರ ಮನೆಗಳಲ್ಲಿ ಬೇಡು ಯಾರು ಇಲ್ಲ ಅನ್ನೋದಿಲ್ಲ ಕಣೋ" ಎಂಬ ಮಾತು ಮನಸ್ಸಿನಲ್ಲಿ ಭದ್ರವಾಗಿತ್ತು. ಅದರಂತೆಯೇ ನನ್ನ , ನನ್ನ ಮಗನ ವಿದ್ಯೆಗೆ ಮತ್ತು ಜೀವನಕ್ಕೆಂದು ಬೆಂಗಳೊರ್ ನಗರಕ್ಕೆ ಬಂದೆ. ಮಧುಕರಿ(ಯಾಯವಾರ) ಪ್ರಾರಂಭಿಸಿದೆ , ಇದೊಂದು ಅಮೋಘವಾದ ವೃತ್ತಿ , ಇದು "ಭಗವತ್ಗೀತೆಯ ಪ್ರಯೋಗಾಲಯ" ಅಧ್ಯಯನ ಮಾಡಿದ್ದನ್ನ practicle ಆಗಿ ಅನುಭವಿಸಲಿಕ್ಕೆ ಇರುವ lab. ಹೃದಯದ ಗಟ್ಟಿತನ ಪರೀಕ್ಷೆ ಮಾಡುವ ಮತ್ತು ಗಟ್ಟಿತನ ಕೊಡುವ ಪವಿತ್ರ ಬ್ರಾಹ್ಮಣನ ವೃತ್ತಿ. ಗುರುಗಳ ಅನುಗ್ರಹದಿಂದ ನಡೆಯುತ್ತಿದೆ.
ಗುರುಗಳ ಅನುಗ್ರಹ ಮತ್ತು ಅವರ ಕರುಣೆಯಿಂದ ನಾನು ಮತ್ತು ನನ್ನ ಕುಟುಂಬದ ಎಲ್ಲರೂ ಕೂಡ ಈ ಒಂದು ಮಧುಕರಿ ವೃತ್ತಿಯಲ್ಲಿ ನಂಬಿಕೆಯಿಂದ ಇದ್ದೇವೆ. ನನ್ನ ಸಹಧರ್ಮಿಣಿಯು ಕೂಡ ಈ ನಿಟ್ಟಿನಲ್ಲಿ ಸಾಕಷ್ಟು ಪ್ರೋತ್ಸಾಹವನ್ನು ಕೊಡುತ್ತಾ, ನಿತ್ಯದಲ್ಲಿ ನಡೆಯುವ ಭಗವಂತನ ವಿಷಯಕ ಪಾಠಗಳ ಚರ್ಚೆಗಳನ್ನು ಮನೆಮಂದಿಯ ಜೊತೆ ಹಂಚಿಕೊಳ್ಳುತ್ತಾ ತತ್ವಗಳನ್ನು ಅಳವಡಿಸಿಕೊಂಡು ಪ್ರೋತ್ಸಾಹವನ್ನು ಕೊಡುತ್ತಿದ್ದಾಳೆ.
ಈಗ ಬೆಂಗಳೊರ್ ನಗರದ ಶ್ರೀನಗರದಲ್ಲಿ ಒಂದು ಬಾಡಿಗೆ ಮನೆಯಲ್ಲಿ ವಾಸಿಸುತಿದ್ದೇವೆ . ಮಕ್ಕಳಿಗೆ ಸಂಸ್ಕೃತ -ವ್ಯಾಕರಣ -ವೇದಾಂತ ಪಾಠಗಳನ್ನು ಹೇಳುತಿದ್ದೇನೆ. ಉಪಜೀವನಕ್ಕಾಗಿ ಮಧುಕರ ವೃತ್ತಿಯನ್ನು ಆರಿಸಿದ್ದೇನೆ . 2 ತಿಂಗಳಿಗೊಮ್ಮೆ ಆಸ್ತಿಕರ ಮನೆಗಳಿಗೆ ಹೋಗಿ 1/2-1 ಘಂಟೆ ಪ್ರವಚನ ಮಾಡಿ ಬಂದ ದಕ್ಷಣೆಯಿಂದ ಜೀವನವನ್ನು ಸಾಗಿಸುತಿದ್ದೇನೆ. ಇಂತಿಷ್ಟೆ ದಕ್ಷಿಣೆ ಕೊಡಬೇಕೆಂಬ ನಿಯಮ ಸರ್ವಥಾ ಇಲ್ಲ.
ಪಾಠ -ಪ್ರವಚನ :
ಶ್ರೀಮದಾನಂದತೀರ್ಥರ ವಿಷ್ಣುತತ್ತ್ವನಿರ್ಣಯ ಮತ್ತು ಗೀತಾ ಭಾಷ್ಯ ಗ್ರಂಥಗಳು ನನ್ನ ಮೇಲೆ ಗಾಢ ಪ್ರಭಾವವನ್ನು ಬೀರಿದವು. ನ್ಯಾಯಸುಧಾ ಗ್ರಂಥವಂತು UNPARALLED ಗ್ರಂಥ. ಉತ್ಸಾಹಿ ಯುವಕರು ಈ ನ್ಯಾಯಸುಧಾ ಗ್ರಂಥವನ್ನು ಓದದಿದ್ದರೆ ಅವರು ಒಂದು ಅಪರೂಪದ ನಿಧಿಯನ್ನು ಕಳೆದುಕೊಂಡಂತೆಯೇ. ಹೀಗೆ ನನ್ನ ಆನಂದಕ್ಕಾಗಿ ನಾನು ಓದಿದೆ .
ಏನಿದು ಮಧುಕರ ವೃತ್ತಿ:
ಮಧುಕರಿ ವೃತ್ತಿಯನ್ನು ಆಶ್ರಯಿಸಿ ಪ್ರತಿ ಎರಡು ತಿಂಗಳಿಗೆ ಒಮ್ಮೆ ಒಬ್ಬರ ಮನೆಗೆ ಹೋಗುತ್ತೇನೆ (ಕೆಲವರ ಅಪೇಕ್ಷೆಯಂತೆ ತಿಂಗಳಿಗೊಮ್ಮೆ). ಒಂದು ಗಂಟೆಗಳ ಕಾಲ ಭಾಗವತ, ಭಗವದ್ಗೀತಾ ಅಥವಾ ಅಪೇಕ್ಷಿತವಾದ ಒಂದು ಶಾಸ್ತ್ರದ ವಿಚಾರದ ಪ್ರವಚನ ಹಾಗೂ ಚರ್ಚೆಯನ್ನು ನಡೆಸಿ ಅವರ ಕೊಟ್ಟಂತಹ ದಕ್ಷಣೆಯನ್ನು ಸ್ವೀಕರಿಸಿ ಉಪಜೀವನವನ್ನು ನಡೆಸುತ್ತಿದ್ದೇನೆ.
ಹಾಗಾಗಿ ನೀವು ಅಥವ ನಿಮ್ಮ ಪರಿಚಯಸ್ತರು ಯಾರಾದರೂ ಈ ಒಂದು ನನ್ನ ಕಾರ್ಯಕ್ರಮಗಳ., ಗುರುಕುಲದ Online ಪಾಠಗಳ ಮತ್ತು ನಿಮ್ಮ ಮನೆಯಗಳಲ್ಲಿ ವಾರದ ಪರಿಯಂತ ಭಾಗವತಾದಿ ಸಪ್ತಹ ಗಳನ್ನು ನಡೆಸಲು ಇಚ್ಚೆಯಿದ್ದರೆ ಅವರಿಗೆ ತಿಳಿಸಿ..ಇಲ್ಲಿ ಮುದುಕರಿ ವೃತ್ತಿಯಲ್ಲಿ ಕೇವಲ ಇದು ಪ್ರವಚನವಾಗಿರದೆ., ಒಂದು ಚರ್ಚಾ ರೂಪವಾದ ವಾತಾವರಣವಿರುತ್ತದೆ. ಹಾಗಾಗಿ ಅಪೇಕ್ಷಿತರು ಆ ವಿಷಯಕ್ಕೆ ಅನುಗುಣವಾಗಿ ಪ್ರಶ್ನೆಗಳನ್ನು ಮತ್ತು ಉತ್ತರಗಳ ಒಂದು ಚರ್ಚ ಮಾಡಲು ಅವಕಾಶವಿರುತ್ತದೆ. ಚಿಕ್ಕ ಮಕ್ಕಳಿಂದ ಹಿಡಿದು ಸ್ತ್ರೀಯರು., ಬಾಲಕರು ಹಾಗೂ ವೃದ್ಧರು ಎಲ್ಲರು ಕೂಡ ಸೌಹಾರ್ದತೆಯಿಂದ ತಮ್ಮ ಕುತೂಹಲವನ್ನು ಪ್ರಶ್ನಿಸುತ್ತಾ ಚರ್ಚೆಗಳನ್ನು ನಡೆಸುತ್ತಾರೆ
ಮಧುಕರ ವೃತ್ತಿಯ ಶಾಸ್ತ್ರೀಯ ಹಿನ್ನೆಲೆ
ಯುವ-ಆಧ್ಯಾತ್ಮಚಿಂತನ ಎಂಬ Youtube channel ಅನ್ನು ಇಂದಿನ ಯುವಕರಿಗೆ -ಯುವತಿಯರಿಗೆ- ಮಕ್ಕಳಿಗೆ ಆಸ್ತಿಕತೆಯ ವಿಚಾರಗಳು ಮೊಳೆಯಲಿ ಎಂದು Video ಗಳನ್ನು ಮಾಡಿದ್ದೇನೆ.
https://youtu.be/SSqd8sNRQvY
Kampli Sheshagiri Achar Jois,
#970-15, 10th main,.road opp to Kusuma hospital pharmacy,Raghavendra block , Srinagara ,Bangalore -560050. ಪಾಠ - ಪ್ರವಚನ/ಮಧುಕರ ವೃತ್ತಿ Mob / WhatsApp./phonepe: 9964069933
For online Donation:
Name:Sheshagiri J
A/c No: 10235568766
IFSC:SBIN0007637
BRANCH: SBI, SRINAGAR
ಹರೇ ಶ್ರೀನಿವಾಸ 🙏ತುಂಬಾ ಸಂತೋಷ. ದೇವರ ಸೇವೆಗಾಗಿ ನಿಮ್ಮ ಜೀವನವನ್ನು ಮುಡಿಪು ಇಟ್ಟಿದ್ದು. ಆಧುನಿಕತೆಯ, ಧರ್ಮ ಕ್ಷೀಣವಾಗುತ್ತಿರುವ ಈ ಕಾಲದಲ್ಲಿ ನಿಮ್ಮಂಥ ಭಕ್ತರು ಅಪರೂಪ. ನಿಮ್ಮ ಧಾರ್ಮಿಕ, ಆಧ್ಯಾತ್ಮಿಕ ಸೇವೆಗಳು ಶ್ರೀ ಹರಿ ದಯೆಯಿಂದ ಸದಾ ಕಾಲ ನಿರ್ವಿಘ್ನವಾಗಿ ನಡೆಯಲಿ.🙏ಮಧುಕರ ವೃತ್ತಿಯ ಬಗ್ಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೀರಾ?
ReplyDeleteಹರೇ ಶ್ರೀನಿವಾಸ 🙏
ನಿಮ್ಮ ಜೀವನದ ಘಟನೆ ಕೇಳಿ ತುಂಬಾ ವಿಚಿತ್ರ ಅನಿಸಿತು ಭಗವಂತನ ಲೀಲೆ ತುಂಬಾ ದೊಡ್ಡದು ಅವನು ಆಡಿಸಿದ ಹಾಗೇ ಅಡಬೇಕು ಹರೇ ಶ್ರೀನಿವಾಸ🙏🙏
Deleteಮಧುಕರ ವೃತ್ತಿಯ ಪೂರ್ಣ ಮಾಹಿತಿಯನ್ನು ಸಧ್ಯದಲ್ಲಿಯೇ YouTube , Blog ಮೂಲಕ ನೀಡುತ್ತೇನೆ
Deleteಅದ್ಭುತವಾದ ನಿರ್ಧಾರ ಕೈಗೊಂಡು ಮುಂದಡಿ ಇಡುವ ಮೂಲಕ ನಿಜಾರ್ಥದ ಭಗವತ್ಪೂಜೆ ನಡೆಸುತ್ತಿರುವಿರಿ. ಈ ಫೂಜೆಯ ಪುಷ್ಪವಾಗುವ ಭಾಗ್ಯವನ್ನು ನಮಗೂ ಒದಗಿಸಿ.
ReplyDeleteಪ್ರಣಾಮಗಳು.
ಜಿತಾಮಿತ್ರ
9731982232
ಎಲ್ಲಾ ನಮ್ಮ ಗುರುಗಳ ಅನುಗ್ರಹ. ಮುಂದೆ ಮತ್ತೆ ನಿಮ್ಮನ್ನು ಸಂಪರ್ಕಿಸುತ್ತೇನೆ
Deleteನಿಜಕ್ಕೂ ಅದ್ಭುತವಾದ ಪರಿವರ್ತನೆ, ಸಮುದಾಯಕ್ಕೆ ನಿಮ್ಮ ಮಾರ್ಗದರ್ಶನ ಅವಶ್ಯ. ಇಷ್ಟು ಚಿಕ್ಕ ವಯಸ್ಸಿನಲ್ಲೇ ತುಂಬಾ ಸಾಧನೆ. ಶ್ರೀಹರಿ ನಿಮಗೆ ಎಲ್ಲಾ ಸಹಕಾರ ನೀಡಲೆಂದು ಪ್ರಾರ್ಥನೆ. ನಿಮ್ಮ ಈ ಸಾಧನೆಯ ಹಾದಿಗೆ ನಮ್ಮ ಮಹಾಸಭಾದ ಸಂಪೂರ್ಣ ಬೆಂಬಲ. ನಿಮ್ಮ ಜೊತೆಗೆ ನಾವಿದ್ದೇವೆ.
ReplyDeleteಮುರುಳಿದರ,
ಅಧ್ಯಕ್ಷರು,
ಅಖಿಲ ಕರ್ನಾಟಕ ಮಾಧ್ವ ಮಹಾ ಸಭಾ.
9341967809.
Send me your phone no & address my no 9844169412 madhava murthy. I will meet you .we have a trust running for Sri Guru Raghavendra Swamy Brundavana in Alur post off tumkur road bangalore .
ReplyDeleteName.KN Ranganath.mobile
ReplyDelete9845271625
Contact me Through WhatsUp🙏
Thank you very much. With very humble pranams, I like to invite you for 1/2 hour discourse in my house. Please guide me the formalities. (My No.8548006418)
ReplyDeleteYou can contact Vidyapeetha near by your house, Shri pejawar swamiji will definitely provide opportunities for your learning and earnings through regular PAATHA and PRAVACHANA apart from giving PRAVACHANA at various Rayaramutts and Madhava Sanghas in Bangalore.
ReplyDeleteHare srinivasa
ReplyDeletePlease connect me @ Raghavendra-9740413603
ಮಾನವ ಬದುಕಿನ ಉದ್ದೇಶವು ಭಗವನ್ನಾಮ ಸ್ಮರಣೆಯಿಂದ ಅವನ ಧಾಮವನ್ನು ಸೇರುವುದೇ ಆಗಿದ್ದು...ಈ ದಾರಿಯಲ್ಲಿ ನೀವು ನಮ್ಮನ್ನೆಲ್ಲಾ ಕೊಂಡೊಯ್ಯುತ್ತಿರುವುದು ನಮ್ಮ ಪೂರ್ವ ಜನ್ಮದ ಸುಕೃತವೇ ಸರಿ ಗುರುಗಳೆ.....ಹರೇ ಕೃಷ್ಣ
ReplyDeleteಧನ್ಯವಾದಗಳು ಕಂಪ್ಲಿ ಆಚಾರ್ಯರಿಗೆ ಹಾಗೂ ನಮಸ್ಕಾರಗಳು. ನಾನು ಹನುಮೇಶ, ಮೈಸೂರಿನಿಂದ. ನಿಮ್ಮ ಜೀವನದಲ್ಲಿ ತಿರುವು ಬಂದ ಕಾರಣ ನಿಮ್ಮ ದೃಢ ನಿರ್ಧಾರ. ಭಗವಂತ ಯಾವಾಗ ಮತ್ತು ಹೇಗೆ ಪ್ರೇರಣೆ ಮಾಡುವನೋ ಅವನೇ ಬಲ್ಲ. ಗೀತೆಯಲ್ಲಿ ಅವನೇ ಹೇಳಿದ್ದಾನೆ "ನಾ ಮೇ ಭಕ್ತ: ಪ್ರಣಶ್ಯತಿ" ಎಂದು. ನಿಮ್ಮ ಅಚಲವಾದ ಸಂಕಲ್ಪಕ್ಕೆ ತನ್ನತ್ತ ಸೆಳೆದಿದ್ದಾನೆ. ಅವನ ಕೃಪೆಗೆ ಪಾತ್ರರಾಗಿದ್ದೀರ. ಸಂತೋಷ.
ReplyDeleteಮುಂದೆಯೂ ತನ್ನೆಡೆಗೆ ಕರೆದೊಯ್ಯುತ್ತಾನೆ ಮತ್ತು ಜೀವನವನ್ನೂ ಸುಖಮಯವಾಗಿಸುತ್ತಾನೆ. ಅದಕ್ಕೆ ಅವನೇ ಗ್ಯಾರಂಟಿ. ಶುಭವಾಗಲಿ ಎಂದು ಅವನನ್ನೇ ಪ್ರಾರ್ಥಿಸುತ್ತೇನೆ.
ಧನ್ಯವಾದಗಳು
DeletePlease make two options in the top English and Kannada, on click of English give this full content in English so that people who don't know kannada can also read about your life and join your patha
ReplyDeleteWill Definately do .
Deleteನಮಸ್ಕಾರ ಆಚಾರ್ಯರಿಗೆ, ನಿಮ್ಮನ್ನು ಕಂಪ್ಲಿ ಟ್ ಆಚಾರ್ಯ ಎನ್ನಬಹುದು ಈ ದೃಢ ನಿರ್ಧಾರ ಲೌಕಿಕ ಜಗತ್ತಿನಿಂದ , ಶಾಸ್ತ್ರ ಪಾಠ ಹಾಗೂ ಮದುಕರ ವೃತ್ತಿ ಇಂದ ಜೀವನ ನಡೆಸುವಿಕೆ ಇದರಬಗ್ಗೆ ಕೇಳಿ ಬಹಳ ಆಶ್ಚರ್ಯಾ ಆಗುತ್ತೆ. ನನಗು ತಮ್ಮಿಂದ ಪಾಠ ಕೇಳುವ ಇಚ್ಛೆಇದೆ. ದಯವಿಟ್ಟು ಹ್ಯಾಗೆ ಎಂದು ತಿಳಿಸಿ. ತುಳಸಿದಳ ಕಳಿಸಬಹುದಾ?
ReplyDeleteContact me :9964069933
Delete